ಬೋನಿಗೆ ಬಿದ್ದ ಚಿರತೆ.

0
30

ದೊಡ್ಡಬಳ್ಳಾಪುರ: ತಾಲೂಕು ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಎರಡುಮೂರು ದಿನಗಳಿಂದ ಕಾನಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ.
ಹಿರೇಮುದ್ದೇನಹಳ್ಳಿ, ಕಲ್ಲುಕೋಟೆ ಅರಣ್ಯ ಪ್ರದೇಶ ಗಳಲ್ಲಿ ತಿರುಗಾಡುತ್ತಿದ್ದ ಚಿರತೆ ಮೇಲಿನ ಜೂಗಾನ ಹಳ್ಳಿ ಗ್ರಾಮ ದಲ್ಲಿ ಎರಡು ದಿನಗಳ ಹಿಂದೆ‌ ಜಾನುವಾರುಗಳ ಮೇಲೆ ದಾಳಿ‌ ಮಾಡಿ ಎರಡು ಹಸುಗಳನ್ನು ಕೊಂದಿದ್ದ ಚಿರತೆ ಕಳೆದ ರಾತ್ರಿ ಬೋನಿಗೆ ಬಿದ್ದಿದೆ. ಹಾಡಹಗಲೇ ಚಿರತೆ ದಾಳಿಯಿಂದ ಜನ ಭಯ ಭೀತರಾಗಿ, ಚಿರತೆಯನ್ನು ಹಿಡಿದು ತಮ್ಮ ಜಾನುವಾರುಗಳನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಹಿರೇಮುದ್ದೇನ ಹಳ್ಳಿಯಲ್ಲಿ ಅಳವಡಿಸಿದ್ದ ಬೋನಿಗೆ ಬುಧವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here