ಮನೆಜಿಲ್ಲೆ ಸುದ್ದಿನಿಲ್ಲದ ರಸ್ತೆ ಅಪಘಾತ:ಮಹಿಳೆಗೆ ಕಾಲು ಮುರಿತ

ನಿಲ್ಲದ ರಸ್ತೆ ಅಪಘಾತ:ಮಹಿಳೆಗೆ ಕಾಲು ಮುರಿತ

 

: ಪಾಲನಜೋಗಿಹಳ್ಳಿಯಲ್ಲಿ ನಿನ್ನೆತಾನೇ ಕೆಎಸ್ ಆರ್ ಟಿಸಿ ಬಸ್ ಹರಿದು ಯುವಕ ಮೃತಪಟ್ಟಿದ್ದರು ಇಂದುಮತ್ತೆ ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಮಹಿಳೆಗೆ ಗುದ್ದಿದೆ ಈ ಅಪಘಾತದಲ್ಲಿ ಮಹಿಳೆಯ ಕಾಲು ಮುರಿದಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೌದು ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗ ಹಳ್ಳಿ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ ವಾದಂತಿದೆ ಯಲಹಂಕ-ಹಿಂದೂಪುರ ರಸ್ತೆಯ ಪಾಲನಜೋಗಿಹಳ್ಳಿಯ ಗಣೇಶ್ ದೇವಸ್ಥಾನದ ಮುಂಭಾಗ ಈ ಘಟನೆ ಸಂಭವಿಸಿದ್ದು ಮಜಾನ್ ಬಿ (55) ಗಾಯಗೊಂಡ ಮಹಿಳೆ, ಬೈಕ್ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಆಟೋಗಾಗಿ ಕಾಯುತ್ತಿದ್ದ ಮಜಾನ್ ಬಿ (55) ರವರಿಗೆ ವೇಗವಾಗಿ ಬಂದ ಬೈಕ್ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರ ಪರಿಣಾಮ ಮಹಿಳೆಯ ಕಾಲು ಮುರಿದಿದೆ.

ಹಿಂದೂಪುರ-ಯಲಹಂಕ ಟೋಲ್ ರಸ್ತೆಯಾಗಿದ್ದು, ರಸ್ತೆಯ ನಿರ್ವಹಣೆಯನ್ನ ಟೋಲ್ ನವರು ಮಾಡುತ್ತಿದ್ದಾರೆ, ರಸ್ತೆಯಲ್ಲಿ ಸೂಚನ ಫಲಕ, ಜಿಬ್ರಾ ಕ್ರಾಸ್, ಸ್ಪೀಡ್ ಬ್ರೇಕರ್ ಹಾಕದೆ ಇರುವುದು ಅಪಘಾತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments