ದೊಡ್ಡಬಳ್ಳಾಪುರ :ಕರ್ನಾಟಕ ರಾಜ್ಯ ಪೌರನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ನಗರಸಭೆಯ ಲೆಕ್ಕಾಧಿಕಾರಿ ಡಾ. ಪಿ.ಪಾಂಡು ಸಿಂಧೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ನೂತನ ಪದಾಧಿಕಾರಿಗಳು: ಜಿಲ್ಲಾ ಅಧ್ಯಕ್ಷ :ಡಾ.ಪಿ.ಪಾಂಡುಸಿಂಧೆ, ಲೆಕ್ಕಾಧಿಕಾರಿ ನಗರಸಭೆ, ದೊಡ್ಡಬಳ್ಳಾಪುರ. ಕಾರ್ಯದರ್ಶಿ – ಆರ್.ಐ ಗೋವಿಂದರಾಜು, ನಗರಸಭೆ, ದೊಡ್ಡಬಳ್ಳಾಪುರ. ಉಪಾಧ್ಯಕ್ಷ – ಚಂದ್ರಶೇಖರ್, ನೆಲಮಂಗಲ. ಖಜಾಂಚಿ – ಸಾಹಿದಾ, ಮ್ಯಾನೇಜರ್ ದೊಡ್ಡಬಳ್ಳಾಪುರ. ರಾಜ್ಯ ಪರಿಷತ್ ಸದಸ್ಯ – ಉಮಾಶಂಕರ್, ಬಾಶೆಟ್ಟಿಹಳ್ಳಿ. ನಿರ್ದೇಶಕರಾಗಿ ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಯಿಂದ ವೆಂಕಟೇಶ್, ಸುರೇಶ್,ಹೊಸಕೋಟೆಯ ಮಂಜುನಾಥ(ವಾಟರ್ ಮ್ಯಾನ್) ಶಿವಕುಮಾರ,(ಪೌರಕಾರ್ಮಿಕ), ವಿಜಯಪುರದ ಅಜ್ಮತ್ ಉಲ್ಲಾ,(ಎಲೆಕ್ಟ್ರಿಕಲ್), ಲಾವಣ್ಯ( ಎಸ್ಎಚ್ಐ) ದೇವನಹಳ್ಳಿಯ ಎಂ.ನಾರಾಯಣ ಸ್ವಾಮಿ, ಶ್ರೀದೇವಿ( ಎಸ್ಎಚ್ಐ), ಬಾಶೆಟ್ಟಿಹಳ್ಳಿಯ ಕೀರ್ತಿಲೇಖಾ( ಜೆಎಚ್ಐ), ನೆಲಮಂಗಲದ ಬಿಜಿ ಸುಲೋಚನ( ಎಸ್ಎಚ್ಐ), ಉಮಾ ಶಂಕರ್(ಎಫ್.ಡಿಎ) ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳನ್ನು ತಾಲ್ಲೂಕು ಪೌರಕಾರ್ಮಿಕರ ಘಟಕದಿಂದ ಅಭಿನಂದಿಸಿದರು.







